ಮಿನರ್ವ ಮಿಲ್‌ನಲ್ಲಿ ಕರಿ ಚಿರತೆಯ ಕರಾಮತ್ತು
Posted date: 17/February/2010

ಕೃಷ್ಣಯ್ಯ ಹಾಗೂ ಮೋಹನ್ ನಿರ್ಮಾಣದ ಕರಿಚಿರತೆ ಚಿತ್ರಕ್ಕೆ ಕಳೆದ ವಾರ ಮಿನರ್ವ ಮಿಲ್‌ನಲ್ಲಿ ಹಾಡೊಂದರ ಚಿತ್ರೀಕರಣ ನಡೆಯಿತು.  ಗಜ, ರಾಮ್ ಚಿತ್ರಗಳ ನಿರ್ದೇಶಕ ಮಾದೇಶ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿಜಯ್ ಕರಿಚಿರತೆಯಾಗಿ ಅಭಿನಯಿಸುತ್ತಿದ್ದಾರೆ.  ಈಗಾಗಲೇ ಮೈಸೂರು ಸುತ್ತಮುತ್ತ ೨೫ ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮಾಡಲಾಗಿದೆ. ಮೊನ್ನೆ ಮಿಲ್‌ನ ಆವರಣದಲ್ಲಿ ೮ ಲಕ್ಷ ರೂ. ವೆಚ್ಚದಲ್ಲಿ ಹಾಕಲಾಗಿದ್ದ ಅದ್ಧೂರಿ ಸೆಟ್‌ನಲ್ಲಿ ಮೈ ನೇಮ್ ಈಸ್ ಕರಿ ಚಿರತೆ ಎಂಬ ಹಾಡಿಗೆ ವಿಜಯ್, ಯಜ್ಞ ಶೆಟ್ಟಿ ಜೊತೆ ೨೫ ಜನ ನೃತ್ಯಕಲಾವಿದರು ಹೆಜ್ಜೆ ಹಾಕುತ್ತಿದ್ದರು.  ಹರ್ಷ ನೃತ್ಯ ನಿರ್ದೇಶನದಲ್ಲಿರುವ ಈ ಹಾಡು ನಾಯಕ, ನಾಯಕಿಗೆ ಪ್ರೇಮ ನಿವೇದನೆ ಮಾಡುವ ಕಾನ್ಸೆಪ್ಟ್ ಹೊಂದಿದೆ.

    ಜೀವನದಲ್ಲಿ  ನಮಗಿರುವ ಆಸೆ ಒಂದಾಗಿದ್ದರೆ, ನಡೆವುದೇ ಬೇರೆಯಾಗಿರುತ್ತದೆ.  ಆ ರೀತಿಯ ಘಟನೆ ನಾಯಕನ ಜೀವನದಲ್ಲಿ ಆದಾಗ ಆತ ಭ್ರಮನಿರಸನಗೊಂಡು ಹುಚ್ಚನಾಗುತ್ತಾನೆ.  ನಾಯಕ ವಿಜಯ್ ಈ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ ಎನ್ನುತ್ತಾರೆ ನಿರ್ದೇಶಕ ಮಾದೇಶ್.  ಸಾಧು ಕೋಕಿಲಾರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಶರ್ಮಿಳಾ ಮಾಂಡ್ರೆ ಹಾಗೂ ಯಜ್ಞ ಶೆಟ್ಟಿ ಇಬ್ಬರು ನಾಯಕಿಯರಿದ್ದು, ಜೈಜಗದೀಶ್, ರಂಗಾಯಣ ರಘು, ಸಂಗೀತ, ಸುಧಾ ಬೆಳವಾಡಿ ಪ್ರಮುಖ ಪಾತ್ರದಲ್ಲಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed